ದಿನಾಂಕ: 29-04-2023 ರಂದು ಸ್ಪೂರ್ತಿ ಇಂಟರ್ ಫೇಸ್ ವಿತ್ ಬ್ಯಾಂಕರ್ಸ್ ‍ಕಾರ್ಯಕ್ರಮವನ್ನು ಫಲಾನುಭವಿ ಸಮ್ಮುಖದಲ್ಲಿ ಚರಕದ ಹೊನ್ನೇಸರ ಶ್ರಮಜೀವಿ ಆಶ್ರಮದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಹೆಗ್ಗೋಡು ಕರ್ನಾಟಕ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಶ್ರೀಯುತ ಮೋಹನ ಕೆ. ಹೆಗ್ಗೋಡು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಯುತ ಬಸವರಾಜ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕರ್ತೆಯರಾದ ಶ್ರೀಮತಿ ಪುಷ್ಪಾ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರಾದ ಮೋಹನ ಇವರು ತಮ್ಮ ಬ್ಯಾಂಕ್‌ನಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.

ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕರಾದ ಬಸವರಾಜರವರು ಖಾಸಗಿ ಪೈನಾನ್ಸ್ನಲ್ಲಿ ಸಾಲ ತೆಗೆದುಕೊಳ್ಳುವುದು ನಿಲ್ಲಿಸಿ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡುವುದು ಸುರಕ್ಷಿತ ಹಾಗೂ ಅರೋಗ್ಯಕರವಾಗಿರುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.

ಸಾಕ್ಷರತಾ ಕಾರ್ಯಕರ್ತ್ಯೆಯಾದ ಪುಷ್ಪಾರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಫಲಾನುಭಾವಿಗಳ ಜೊತೆಗೆ ಬ್ಯಾಂಕ್‌ಗಳ ಸೇವೆ ಯೋಜನೆಗಳು ಅನುಷ್ಠಾನದ ಕುರಿತು ಸಮಸ್ಯೆಗಳನ್ನು ಪರಸ್ಪರ ಚರ್ಚಸಿದರು. ಆರ್ ಬಿ ಐ ಕಾನೂನಡಿ ಬರಬಹುದಾದ ಬ್ಯಾಂಕಿನ ಸಮರ್ಪಕ ಸೇವೆ ಹಾಗೂ ಮಾಹಿತಿಗಳನ್ನು ನೀಡಿದರು.